ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಮ್ಮೂರಿಗೆ ರಸ್ತೆಯಿಲ್ಲ ಎಂದ World Cup ತಂದುಕೊಟ್ಟ ಗಡಿನಾಡ ಕನ್ನಡತಿ; 5 ನಿಮಿಷಕ್ಕೆ ಸ್ಯಾಂಕ್ಷನ್ ಮಾಡಿದ DCM!

Deepika Tc News: ಭಾರತಕ್ಕೆ ವಿಶ್ವಕಪ್‌ ತಂದುಕೊಟ್ಟ ಅಂಧರ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ದೀಪಿಕಾ ಟಿಸಿ ಅವರು ಡಿಸಿಎಂ ಬಳಿ ರಸ್ತೆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹೀಗೆ ಹೇಳಿ ಐದು ನಿಮಿಷಕ್ಕೆ ರಸ್ತೆ ಜಾರಿಯಾಗಿದೆ. ತುಮಕೂರಿನ ಶಿರಾ ತಾಲೂಕಿನ ಹುಡುಗಿ ದೀಪಿಕಾ ಟಿಎಸ್.‌ ಈಗ ದೀಪಿಕಾ ಊರು ಹೇಮಾವತಿ ಆಂಧ್ರಪ್ರದೇಶಕ್ಕೆ ಸೇರುತ್ತದೆ. ಐದು ತಿಂಗಳ ಮಗು ಆಗಿದ್ದಾಗ ಉಗುರಿನಲ್ಲಿ ಪರಚಿಕೊಂಡು ಕಣ್ಣು ಹೋಯಿತು. ನರ ವೀಕ್‌ ಇದ್ದರಿಂದ ಆಪರೇಶನ್‌ ಮಾಡಿಸಲು ಆಗೋದಿಲ್ಲ ಎಂದು ಹೇಳಿದ್ದರಂತೆ. ದೀಪಿಕಾ ಅವರು ಊಟಕ್ಕೆ ಒದ್ದಾಡಿದ್ದಾರೆ. ಇಡೀ ಕುಟುಂಬ ಬಡತನದಲ್ಲಿ ಇಷ್ಟು ವರ್ಷ ಕಳೆದಿದೆ. ಕ್ರಿಕೆಟ್‌ನಿಂದ ಹಣ ಸಿಕ್ಕಿದರೆ, ಇಡೀ ತಿಂಗಳು ಮನೆಯವರಿಗೆ ಊಟ ಮಾಡೋಕೆ ರೇಶನ್‌ ಸಿಗುತ್ತದೆ ಎಂಬ ಆಸೆಯಿತ್ತಂತೆ. ಅದರಂತೆ ಅವರು ಕ್ರಿಕೆಟ್‌ ಆಡಿ ವರ್ಲ್‌ಕಪ್‌ ತಂದುಕೊಟ್ಟರು. ನಾನು ಆನಂದಪುರ ಜಿಲ್ಲೆಯಾಗಿದ್ದು, ಈಗ ಸತ್ಯಸಾಯಿಯಾಗಿದೆ. ನಮ್ಮ ಊಟು ಕರ್ನಾಟಕ, ಆಂಧ್ರಪ್ರದೇಶದ ಬಾರ್ಡರ್‌ನಲ್ಲಿ ಬರುವುದು. ನಾನು ಕರ್ನಾಕಟದಲ್ಲಿ ಓದಿದ್ದೇನೆ. ನಮ್ಮ ಊರಿನಲ್ಲಿ ರಸ್ತೆಯೂ ಇಲ್ಲ. ನಮ್ಮ ಊರಿನಲ್ಲಿರುವವರಿಗೆ ಊಟ-ತಿಂಡಿ ಕೂಡ ಸಿಗೋದಿಲ್ಲ ಎಂದು ಪವನ್‌ ಕಲ್ಯಾಣ್‌ ಮುಂದೆ ಹೇಳಿದ್ದಾರೆ. ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಅವರ ಬಳಿ ದೀಪಿಕಾ ಈ ವಿಚಾರವಾಗಿ ಮಾತನಾಡಿದ್ದರು. ದೀಪಿಕಾ ಅವರು ಸಮಸ್ಯೆ ಹೇಳಿಕೊಂಡು ಐದು ನಿಮಿಷಕ್ಕೆ ಓಕೆ ಎಂದಿದ್ದಾರೆ. ಅಷ್ಟ...

BREAKING : ಇಂದಿನಿಂದ ಮೆಟ್ರೋ ಪ್ರಯಾಣದ ದರ ಏರಿಕೆ ಇಲ್ಲ : ದರ ಏರಿಕೆ ಕೈಬಿಟ್ಟ 'BMRCL' ಅದು ಯಾಕೆ.

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಕುರಿತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ಹಗ್ಗ ಜಗ್ಗಾಟ ನಡೆದಿತ್ತು. ಅಷ್ಟೇ ಅಲ್ಲದೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಹ ಟಿಕೆಟ್ ದರ ಕಡಿಮೆ ಆಗಲಿದೆ ಎಂದು ಹೇಳಿಕೆ ನೀಡಿದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿಲ್ಲ ಕೇಂದ್ರದವರು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮೆಟ್ರೋ ಟಿಕೆಟ್ ಪ್ರಯಾಣದ ದರ ಏರಿಕೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿದೆ. ಹಾಗಾಗಿ ಇಂದಿನಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಅವರಿಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಮೂಲಕ ಸೂಚನೆ ಬಂದಿದ್ದು, ನಾಳೆಯಿಂದ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಬೇಡಿ ಎಂದು ಇ-ಮೇಲ್ ಬಂದಿದೆ. ಹಾಗಾಗಿ ನಾಳೆಯಿಂದ ಎಂದಿನಂತೆ ಈ ಹಿಂದಿನ ದರದಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರು ಸಂಚರಿಸಬಹುದಾಗಿದೆ.

ಮಂಡ್ಯಕ್ಕೆ ಬಂಪರ್ ಗಿಫ್ಟ್ ಕೊಟ್ಟೂದರೆ ಕೇಂದ್ರ ಸಚಿವ ಕುಮಾರಸ್ವಾಮಿ

ಮೈಸೂರು: ಕೇಂದ್ರ ಸಚಿವ ಕುಮಾರಸ್ವಾಮಿ ಇದೀಗ ಮಂಡ್ಯ ಜಿಲ್ಲೆಯ ಜನರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಮಂಡ್ಯದಲ್ಲಿ ಆಟೋ ಮೊಬೈಲ್ ಇಂಡಸ್ಟ್ರಿ ತೆರೆಯಲು ಘೋಷಣೆ ಮಾಡಿದ್ದಾರೆ. ಕೇಂದ್ರದ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಲಘುವಾಗಿ ಮಾತನ್ನಾಡಿದ್ದಾರೆ. 16 ಬಜೆಟ್ ಮಂಡಿಸಿರುವ ಅವರಿಗೆ ಕೇಂದ್ರದ ದೂರದೃಷ್ಟಿಯ ಬಜೆಟ್ ಅರ್ಥವಾಗಿಲ್ಲ. ಅವರು ಸಂಕುಚಿತ ಭಾವನೆ ತೋರಿದ್ದಾರೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಖಾಲಿ ಚಂಬಿನ ಕ್ರೆಡಿಟ್ ರಾಜ್ಯ ಸರ್ಕಾರಕ್ಕೆ ಹೋಗಬೇಕು. ಯಾಕಂದ್ರೆ ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಜನರಿಗೆ ಖಾಲಿ ಚಂಬನ್ನೆ ಕೊಡುತ್ತಿದೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕುಮಾರಸ್ವಾಮಿ ಮಂಡ್ಯಕ್ಕೆ ಹಾಗೂ ರಾಜ್ಯಕ್ಕೆ ಏನು ತಂದಿದ್ದಾರೆ. ಕಾಂಗ್ರೆಸ್ ನಾಯಕರು ಸಣ್ಣತನದ ಪ್ರಶ್ನೆಗಳನ್ನೇ ಕೇಳುತ್ತಿದ್ದಾರೆ. ಅವರ ಪ್ರಶ್ನೆಗೆ ಈಗ ನನ್ನ ಕೆಲಸವರೆ ಉತ್ತರವಾಗಿದೆ. ಕೇಂದ್ರ ಸರ್ಕಾರ ನನಗರ ಮಹತ್ವದ ಜವಬ್ದಾರಿ ನೀಡಿದೆ. ಇದರ ಅನ್ವಯ ರಾಜ್ಯದಲ್ಲಿ ಆಟೋ ಮೊಬೈಲ್ ರಿಸರ್ಚ್ ಆಫ್ ಇಂಡಿಯಾ ಟೆಸ್ಟಿಂಗ್ ಸೆಂಟರ್ ತರಲು ಮುಂದಾಗಿದ್ದೇವೆ. ಈ ಘಟನಕವನ್ನು ಮಂಡ್ಯದಲ್ಲಿಯೇ ಸ್ಥಾಪಿಸಲು ನಿರ್ಧರಿಸಲಾಗಿದೆ. ಮಂಡ್ಯದಲ್ಲಿಯೇ ಈ ಆಟೋ ಆಟೋಮೊಬೈಲ್ ಸೆಂಟರ್ ನಿರ್ಮಾಣವಾಗಬೇಕು. ಇದಕ್ಕಾಗಿ ಮಂಡ್ಯದಲ್ಲೇ 100 ಎಕರೆ ಜಾಗವನ್ನು ನೀಡುವಂತೆ ಕೋರಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆ...

BIG NEWS : ಏ.1ರಿಂದ `ಹೊಸ ಆದಾಯ ತೆರಿಗೆ ನಿಯಮಗಳು' ಜಾರಿ : ಮನೆಯಲ್ಲಿರುವ ಚಿನ್ನ-ಆಸ್ತಿಯ ಮೌಲ್ಯ ಹೀಗೆ ನಿರ್ಧರಿಸುತ್ತೆ ಸರ್ಕಾರ.!

ನವದೆಹಲಿ : ದೇಶದ ತೆರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳಿಗೆ ಆದಾಯ ತೆರಿಗೆ ಇಲಾಖೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಇಲಾಖೆಯು "ಆದಾಯ ತೆರಿಗೆ ನಿಯಮಗಳು, 2026" ರ ಕರಡನ್ನು ಬಿಡುಗಡೆ ಮಾಡಿದೆ, ಇದನ್ನು ಸಂಸತ್ತು ಅಂಗೀಕರಿಸಿದ ನಂತರ, ಪ್ರಸ್ತುತ 1962 ರ ತೆರಿಗೆ ನಿಯಮಗಳನ್ನು ಬದಲಾಯಿಸುತ್ತದೆ. ಹೊಸ "ಆದಾಯ ತೆರಿಗೆ ಕಾಯ್ದೆ, 2025" ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ಈ ಕಾನೂನನ್ನು ಜಾರಿಗೆ ತರಲು, ಇಲಾಖೆಯು ಈ ಹೊಸ ನಿಯಮಗಳು ಮತ್ತು ನಮೂನೆಗಳಿಗೆ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ಇಲಾಖೆಯು ಪಾರದರ್ಶಕತೆಯನ್ನು ಕಾಯ್ದುಕೊಂಡಿದೆ ಮತ್ತು ಈ ಕರಡನ್ನು ಸಾರ್ವಜನಿಕ ವಲಯದಲ್ಲಿ ಇರಿಸಿದೆ ಇದರಿಂದ ಸಾರ್ವಜನಿಕರು ಮತ್ತು ಪಾಲುದಾರರು ತಮ್ಮ ಪ್ರತಿಕ್ರಿಯೆಯನ್ನು ನೀಡಬಹುದು. ನೀವು ಈ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಸಲಹೆಗಳನ್ನು ನೀಡಲು ಬಯಸಿದರೆ, ನಿಮಗೆ ಫೆಬ್ರವರಿ 22, 2026 ರವರೆಗೆ ಸಮಯವಿದೆ. ತೆರಿಗೆ ನಮೂನೆಗಳು ಈಗ "ಸ್ಮಾರ್ಟ್" ಆಗಿರುತ್ತವೆ ತೆರಿಗೆದಾರರು ಹೆಚ್ಚಾಗಿ ಆದಾಯ ತೆರಿಗೆ ನಿಯಮಗಳು ಮತ್ತು ನಮೂನೆಗಳು ತುಂಬಾ ಸಂಕೀರ್ಣವಾಗಿವೆ ಎಂದು ದೂರುತ್ತಾರೆ. ಈ ಬಾರಿ, ಕರಡನ್ನು ಸಿದ್ಧಪಡಿಸುವಾಗ, ಇಲಾಖೆಯು ನಿಯಮಗಳ ಭಾಷೆಯನ್ನು ಸರಳಗೊಳಿಸುವತ್ತ ಗಮನಹರಿಸಿದೆ. ಲೆಕ್ಕಾಚಾರಗಳನ್ನು ಸರಳಗೊಳಿಸಲು ಸೂತ್ರಗಳು ಮತ್ತು ಕೋಷ್ಟಕಗಳನ್ನು ಬಳಸಲಾಗಿದೆ. ಹೆಚ್ಚುವರಿಯಾಗಿ, 196...

WPL 2026 Final: ಮತ್ತೊಮ್ಮೆ ಡೆಲ್ಲಿ ಧೂಳೀಪಟ; ದಾಖಲೆಯ ಚೇಸ್ ಮಾಡಿ ಗೆದ್ದು ಎರಡನೇ ಬಾರಿ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ

ವಡೋದರಾದ ಕೊತಾಂಬಿ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ. ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 204 ರನ್‌ಗಳ ಗುರಿಯನ್ನು ನೀಡಿದೆ. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಫೈನಲ್‌ನಲ್ಲಿ ಅತಿದೊಡ್ಡ ಚೇಸ್ ಮಾಡಿದ ದಾಖಲೆ ಬರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ತಂಡದ ಪರ ಲಿಜೆಲ್ ಲೀ ಹಾಗೂ ಶಫಾಲಿ ವರ್ಮಾ 49 ರನ್ ಜತೆಯಾಟವಾಡಿದರು. ಲಿಜೆಲ್ ಲೀ 37 ರನ್ ಗಳಿಸಿದರೆ, ಶಫಾಲಿ ವರ್ಮಾ 20 ರನ್ ಬಾರಿಸಿದರು. ಇನ್ನುಳಿದಂತೆ ನಾಯಕಿ ಜೆಮಿಮಾ ರೊಡ್ರಿಗಸ್ 57 ರನ್ ಬಾರಿಸಿದರೆ, ಅಂತಿಮ 19ನೇ ಓವರ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ ಶಿನೆಲ್ ಹೆನ್ರಿ 15 ಎಸೆತಗಳಲ್ಲಿ ಅಜೇಯ 35 ರನ್ ಬಾ...

ಬೆಂಗಳೂರು ಮೆಟ್ರೋ ದರ ಏರಿಕೆ ಫೆಬ್ರವರಿ 9 ರಿಂದ ಫಿಕ್ಸ್: ಇಲ್ಲಿದೆ ಪರಿಷ್ಕೃತ ದರ ಪಟ್ಟಿ

ಬೆಂಗಳೂರು: ಬಿಎಂಆರ್‌ಸಿಎಲ್ ನಿರೀಕ್ಷೆಯಂತೆ ಮತ್ತೆ ಮೆಟ್ರೋ ದರ ಏರಿಕೆಯಾಗಿದೆ. ಈ ಹೊಸ ದರಗಳ ಫೆಬ್ರವರಿ 9, 2026 ರಿಂದ ಜಾರಿಗೆ ಬರಲಿದೆ. ಪ್ರತೀವರ್ಷ ಸ್ವಯಂಚಾಲಿತವಾಗಿ ಈ ದರ ಪರಿಷ್ಕರಣೆಗೆ "ದರ ನಿಗದಿ ಸಮಿತಿ -(FFC) ಮಾಡಿದ ಶಿಫಾರಸ್ಸಿನಂತೆ ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗ್ತಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. 96.10 ಕಿಮೀಗಳ ಸಂಪೂರ್ಣ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ ರೂ.1 ಮತ್ತು ಗರಿಷ್ಠ ರೂ.5 ರಷ್ಟು ಹೆಚ್ಚಳವಾಗಿದೆ. ವಲಯ ಅಂತರ (km) ಪ್ರಸ್ತುತ ದರ ಪರಿಷ್ಕೃತ ದರ F1 0-2 10 ರೂ 11 ರೂ F2 2-4 20 ರೂ 21 ರೂ F3 4-6 30 ರೂ 32 ರೂ F4 6-8 40ರೂ 42 ರೂ F5 8-10 50 ರೂ 53 ರೂ F6 10-15 60 ರೂ 63 ರೂ F7 15-20 70 ರೂ 74 ರೂ F8 20-25 80 ರೂ 84 ರೂ F9 25-30 90 ರೂ 95 ರೂ F10 30> 90 ರೂ 95 ರೂ ರಿಯಾಯಿತಿ ಮುಂದುವರಿಕೆ ಬಿಎಂಆರ್‌ಸಿಎಲ್ ಸ್ಮಾರ್ಟ್-ಕಾರ್ಡ್/NCMC ಬಳಕೆದಾರರಿಗೆ ಅಸ್ತಿತ್ವದಲ್ಲಿರುವ ಎಲ್ಲಾ ರಿಯಾಯಿತಿಗಳ ಮುಂದುವರಿಕೆ • ಪೀಕ್ ಸಮಯದಲ್ಲಿ ಶೇ 5 ರಿಯಾಯಿತಿ, • ಪೀಕ್ ಅಲ್ಲದ ಸಮಯದಲ್ಲಿ ಶೇ 10 ರಿಯಾಯಿತಿ, • ಭಾನುವಾರ ಮತ್ತು ಮೂರು ಗೊತ್ತುಪಡಿಸಿದ ರಾಷ್ಟ್ರೀಯ ರಜಾದಿನಗಳಲ್ಲಿ ಶೇ 10 ರಿಯಾಯಿತಿ. ಮಾನ್ಯತೆ ಪ್ರಸ್ತುತದರ (ರೂ.) ಪರಿಷ್ಕೃತದರ (ರೂ.) ಸ್ಮಾರ್ಟ್ ಕಾರ್ಡ್ ಮೊಬೈಲ್ ಕ್ಯೂಆರ್‌ ಸ್ಮಾರ್ಟ್ ಕಾರ್ಡ್ ಮೊಬೈಲ್ ಕ್ಯೂಆರ್ ಒಂದು ದಿನ 300 250 313 263...

ಭಾರತದ ಮೊದಲ ತಾಯಿಯ ಹಾಲಿನ ಬ್ಯಾಂಕ್

ಭಾರತದ ಮೊದಲ ತಾಯಿಯ ಹಾಲಿನ ಬ್ಯಾಂಕ್ (Human Milk Bank / Breast Milk Bank) ‌ಆಶಿಯಾದಲ್ಲಿಗೆ ಮೊದಲ ಹಾಲಿನ ಬ್ಯಾಂಕ್ ಆಗಿದ್ದು ಮುಂಬೈ (Sion) ನಲ್ಲಿ 1989 ರಲ್ಲಿ ಸ್ಥಾಪಿಸಲಾಯಿತು. ಇದು ವೈದ್ಯಕೀಯ neonatology (ಹೊಸ ಜನ್ಮದಲಾಗಿದೆ ಕಾಳಜಿ ವಿಭಾಗ)ಕ್ಕಾಗಿ ಲಾಕ್ಮಾನ್ಯ ಟಿಲಕ್ ಮ್ಯೂನಿಸಿಪಲ್ ಜನರಲ್ ಆಸ್ಪತ್ರೆಯಲ್ಲಿ ಆರಂಭವಾಗಿ, ಡಾ. ಅರ್ಮಿಡಾ ಫರ್ಮಾಂಡೇಟ ಇವರ ನೇತೃತ್ವದಲ್ಲಿ ನಡೆಯಿತು. ಈಗ ಇದನ್ನು ಡಾ. ಜ್ಯಾಶ್ರೀ ಮಂಡ್ಕರ್ ಮುನ್ನಡೆಸುತ್ತಾರೆ ಮತ್ತು ಹಸುಮಾನರ ಹಾಗೂ ಅಪಾಯದಲ್ಲಿರುವ ಶಿಶುಗಳಿಗೆ donor (ದಾನ ಮಾಡಿದ) ತಾಯಿಯ ಹಾಲನ್ನು ಪೂರೈಸುತ್ತದೆ.  🇮🇳 ಭಾರತದ ಮೊದಲ ತಾಯಿಯ ಹಾಲಿನ ಬ್ಯಾಂಕ್ ಸಂಪೂರ್ಣ ಸಾರಾಂಶ  1. ಯಾವುದು ಮತ್ತು ಎಲ್ಲಿ? ಸ್ಥಳ: Sion Hospital, ಮುಂಬೈ, ಮಹಾರಾಷ್ಟ್ರ. ಸ್ಥਾਪನೆ: 1989 ರಲ್ಲಿ, ಇದು ಆಶಿಯಾದಲ್ಲಿಗೂ ಮೊದಲ human milk bank. ಪ್ರಾರಂಭಿಸಿದವರು: ಡಾ. ಅರ್ಮಿಡ್ ಫರ್ಮಾಂಡೇಟ (Armida Fernandez) ಮತ್ತು ತಂಡ. ವ್ಯವಸ್ಥೆ: LTMG (Lokmanya Tilak Municipal General Hospital) ನಲ್ಲಿದೆ.  2. ಉದ್ದೇಶ ಏನು? ನ್ಯೂಬೋನ್‌ಗಳು (ಹೊಸ ಜನ್ಮದ ಮಕ್ಕಳು) ತಮ್ಮ ತಾಯಿಯ ಹಾಲನ್ನು ಪಡೆದುಕೊಳ್ಳಲು ಸಾಧ್ಯವಿಲ್ಲದಿದ್ದಾಗ, donated breast milk ಅನ್ನು ಪೂರೈಸುವುದು. ತಾಯಿಯ ಹಾಲಿನ ಯಾವುದೇ ಉಚ್ಛitser ಪ್ರಯೋಜನಗಳು (immune benefits, growth suppo...

BREAKING : ಬೆಂಗಳೂರಿನ ಇಟಲಿ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ |Bomb Threat

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಾಂಬ್ ಬೆದರಿಕೆ ಸಂದೇಶ ಪ್ರಕರಣಗಳು ಹೆಚ್ಚುತ್ತಿದೆ. ಇದೀಗ ನಗರದ ಶಾಂತಿನಗರದಲ್ಲಿರುವ ಇಟಲಿ ರಾಯಭಾರಿ ಕಚೇರಿಗೆ (Consulate General of Italy) ಅನಾಮಧೇಯ ವ್ಯಕ್ತಿಯೊಬ್ಬ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ಇಟಲಿಯ ಕಾನ್ಸುಲ್ ಜನರಲ್ ಕಚೇರಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ.ರಾಯಭಾರಿ ಕಚೇರಿಯ ಇಮೇಲ್ ಗೆ ಈ ಬೆದರಿಕೆ ಬಂದಿದೆ ಎಂದು ತಿಳಿದುಬಂದಿದೆ. ಕಚೇರಿ ಆವರಣದಲ್ಲಿ 5 ಆರ್ ಡಿ ಎಕ್ಸ್ ಬಾಂವ್ ಸ್ಪೋಟಿಸುವುದಾಗಿ ದುಷ್ಕರ್ಮಿಗಳು ಎಚ್ಚರಿಕೆ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ಪತ್ತೆ ದಳ (BDDS) ಇಡೀ ಪ್ರದೇಶವನ್ನು ತಪಾಸಣೆ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಯಭಾರಿ ಕಚೇರಿಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಕಚೇರಿಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿ, ಶೋಧ ಕಾರ್ಯ ಮುಂದುವರಿಸಲಾಗಿದೆ. ಈ ಬೆದರಿಕೆ ಕರೆ ಎಲ್ಲಿಂದ ಬಂತು? ಇದರ ಹಿಂದೆ ಯಾರಿದ್ದಾರೆ? ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಶೇ. 5ರಷ್ಟು ಹೆಚ್ಚಳ : ಬೇಡಿಕೆ ಮೀರಿದ ಉತ್ಪಾದನೆ ನೆರೆರಾಜ್ಯಗಳಿಗೆ ಮಾರಾಟ, ರೈತರಿಗೂ ಲಾಭ

ಬೆಗಳೂರು : ರಾಜ್ಯದಲ್ಲಿ ವಾರ್ಷಿಕ ವಿದ್ಯುತ್‌ ಉತ್ಪಾದನೆಯು ಶೇ.5ರಷ್ಟು ಹೆಚ್ಚಳವಾಗಿದ್ದು, ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್‌ಗೆ ಬರವಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 1,100 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಹೆಚ್ಚಳವಾಗಿದ್ದು, ಹೊರ ರಾಜ್ಯಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಮಾರಾಟ ಮಾಡಲಾಗುತ್ತಿದೆ. 2024ರಲ್ಲಿ ತೀವ್ರ ವಿದ್ಯುತ್‌ ಕ್ಷಾಮ ಎದುರಿಸಿದ್ದ ರಾಜ್ಯದಲ್ಲಿ ಈಗ ವಿದ್ಯುತ್‌ಗೆ ಕೊರತೆಯಿಲ್ಲ. ಸಾಂಪ್ರದಾಯಿಕ ಹಾಗೂ ನವೀಕೃತ ಇಂಧನ ಮೂಲಗಳಿಂದ ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆಯು ಗಣನೀಯವಾಗಿ ಏರಿಕೆಯಾಗಿದ್ದು, ಇಂಧನ ಇಲಾಖೆಯು ವಿದ್ಯುತ್‌ ವಲಯದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮುಖ ಮಾಡಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದಲೂ ವಿದ್ಯುತ್‌ ಉತ್ಪಾದನೆ ಏರು ಗತಿಯಲ್ಲೇ ಸಾಗಿದೆ. 2024-25ರಲ್ಲಿ(ಜನವರಿ ಅಂತ್ಯದವರೆಗೆ) 29,634 ಮೆ.ವ್ಯಾ. ವಿದ್ಯುತ್‌ ಉತ್ಪಾದನೆಯಾಗಿತ್ತು. 2025-26ರಲ್ಲಿ (ಜನವರಿ ಅಂತ್ಯಕ್ಕೆ) 30,733 ಮೆ.ವ್ಯಾ. ಉತ್ಪಾದನೆಯಾಗಿದೆ. ಕೃಷಿ ಭೂಮಿ ವಿಸ್ತರಣೆ, ವಾಣಿಜ್ಯ ಮತ್ತು ವಸತಿ ಸ್ಥಳಗಳ ಹೆಚ್ಚಳ, ಹವಾ ನಿಯಂತ್ರಕ ಸಾಧನಗಳು ಹಾಗೂ ಗೃಹೋಪಯೋಗಿ ಸಲಕರಣೆಗಳ ವ್ಯಾಪಕ ಬಳಕೆ, ಕೈಗಾರಿಕೀಕರಣದಿಂದ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಸದ್ಯ ದೈನಂದಿನ ವಿದ್ಯುತ್‌ ಬೇಡಿಕೆಯು 15,715 ಮೆ.ವ್ಯಾ. ಇದ್ದು, ಈ ಬೇಡಿಕೆಯನ್ನು ತಲುಪಲು ಪರ್ಯಾಯ ಶಕ್ತಿ...

ಭಾರತದ ಕಾನೂನು ಅನುಸರಿಸಲು ಆಗಲ್ಲವೆಂದರೆ ಇಲ್ಲಿಂದ ನಿರ್ಗಮಿಸಿ: ವಾಟ್ಸಾಪ್ ವಿರುದ್ಧ ಸುಪ್ರೀಂ ಎಚ್ಚರಿಕೆ

ನವದೆಹಲಿ, ಫೆಬ್ರುವರಿ 3: ವಾಟ್ಸಾಪ್​ನ ಗೌಪ್ಯತಾ ನೀತಿ (WhasApp Privacy Policy) ವಿಚಾರವಾಗಿ ಮೆಟಾ ಸಂಸ್ಥೆಯನ್ನು ಭಾರತದ ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ. 'ನೀವು ಭಾರತೀಯ ಬಳಕೆದಾರರ ಗೌಪ್ಯತೆಯೊಂದಿಗೆ ಆಟವಾಡಬೇಡಿ. ನಮ್ಮ ಒಂದು ಡಿಜಿಟ್ ಡಾಟಾವನ್ನೂ ಪಡೆಯಲು ನಿಮಗೆ ಅವಕಾಶ ಕೊಡಲ್ಲ. ಗೌಪ್ಯತೆ ಉಳಿಸೋದಕ್ಕೆ ಆಗಲ್ಲ ಅಂದರೆ ಭಾರತದಿಂದ ನಿರ್ಗಮಿಸಿ' ಎಂದು ವಾಟ್ಸಾಪ್​ನ ಮಾತೃ ಸಂಸ್ಥೆಯಾದ ಮೆಟಾಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ (ಫೆ. 3) ತಪರಾಕಿ ಹಾಕಿದೆ. ಭಾರತೀಯ ಸ್ಪರ್ಧಾ ಆಯೋಗವು ಒಟಿಟಿ ಮೆಸೇಜಿಂಗ್ ಮಾರುಕಟ್ಟೆಯ ಪ್ರಾಬಲ್ಯವನ್ನು ವಾಟ್ಸಾಪ್ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಕಾರಣಕ್ಕೆ ಭಾರತೀಯ ಸ್ಪರ್ಧಾ ಆಯೋಗವು ವಾಟ್ಸಾಪ್ ಮತ್ತು ಮೆಟಾಗೆ 213 ಕೋಟಿ ರೂ ದಂಡ ವಿಧಿಸಿತ್ತು. ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ ಈ ತೀರ್ಪನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ವಾಟ್ಸಾಪ್ ಮತ್ತು ಮೆಟಾ ಸಂಸ್ಥೆಗಳು ಸುಪ್ರೀಂ ಮೆಟ್ಟಿಲೇರಿದ್ದವು. ಇದರ ವಿಚಾರಣೆಯನ್ನು ಸಿಜೆಐ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಕೈಗೆತ್ತಿಕೊಂಡಿದೆ. ಈ ವೇಳೆ ವಾಟ್ಸಾಪ್ ನೀತಿಯನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಾಟ್ಸಾಪ್ ತನ್ನ ಗೌಪ್ಯತಾ ನೀತಿಯನ್ನು ಬಳಸಿಕೊಂಡು ಬಳಕೆದಾರರ ದತ್ತಾಂಶವನ್ನು ವಾಣಿಜ್ಯಾತ್ಮಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದು ಪ್ರಮುಖ ಆರೋಪ. ಮುಖ್ಯ ನ್ಯಾಯಮೂರ...

ನಾಗಾಲ್ಯಾಂಡ್ – ಸಂಪೂರ್ಣ ಮಾಹಿತಿ

ಭಾರತದಲ್ಲಿ ಇಂಗ್ಲಿಷ್ ಅನ್ನು ಏಕೈಕ ಅಧಿಕೃತ (ಆಡಳಿತ) ಭಾಷೆಯಾಗಿ ಹೊಂದಿರುವ ರಾಜ್ಯ ನಾಗಾಲ್ಯಾಂಡ್ (Nagaland) ಆಗಿದೆ. ನಾಗಾಲ್ಯಾಂಡ್ ಭಾರತದ ಈಶಾನ್ಯ ಭಾಗದಲ್ಲಿರುವ ಒಂದು ಪರ್ವತ ರಾಜ್ಯವಾಗಿದೆ. ಇದು 1963ರ ಡಿಸೆಂಬರ್ 1ರಂದು ಭಾರತದ 16ನೇ ರಾಜ್ಯವಾಗಿ ಸ್ಥಾಪನೆಯಾಯಿತು. ನಾಗಾಲ್ಯಾಂಡ್‌ನ ರಾಜಧಾನಿ ಕೊಹಿಮಾ (Kohima) ಆಗಿದೆ. ಇಲ್ಲಿ ವಿವಿಧ ನಗಾ ಜನಾಂಗಗಳು ವಾಸವಾಗಿದ್ದು, ಪ್ರತಿಯೊಂದು ಜನಾಂಗಕ್ಕೂ ತನ್ನದೇ ಆದ ಭಾಷೆ ಮತ್ತು ಸಂಸ್ಕೃತಿ ಇದೆ. ರಾಜ್ಯದಲ್ಲಿ ಅನೇಕ ಸ್ಥಳೀಯ ಭಾಷೆಗಳು ಇದ್ದರೂ, ಯಾವುದೇ ಒಂದು ಸ್ಥಳೀಯ ಭಾಷೆ ಎಲ್ಲಾ ಜನಾಂಗಗಳಿಗೆ ಸಾಮಾನ್ಯವಾಗಿಲ್ಲ. ಈ ಕಾರಣದಿಂದ, ಎಲ್ಲರಿಗೂ ಸಮಾನವಾಗಿ ಅರ್ಥವಾಗುವ ಭಾಷೆಯಾಗಿ ಇಂಗ್ಲಿಷ್ ಅನ್ನು ರಾಜ್ಯದ ಏಕೈಕ ಅಧಿಕೃತ ಭಾಷೆಯಾಗಿ ಅಂಗೀಕರಿಸಲಾಗಿದೆ. 🔹 ಭಾಷಾ ವೈಶಿಷ್ಟ್ಯಗಳು ಇಂಗ್ಲಿಷ್ – ಏಕೈಕ ಅಧಿಕೃತ ಭಾಷೆ ಸ್ಥಳೀಯ ಭಾಷೆಗಳು – ಆಓ, ಅಂಗಾಮಿ, ಸೆಮಾ, ಲೋಥಾ, ಕಾಂಯಾಕ್ ಮುಂತಾದವು ಶಿಕ್ಷಣ, ಆಡಳಿತ, ನ್ಯಾಯಾಲಯ ಹಾಗೂ ಸರ್ಕಾರಿ ಕಾರ್ಯಗಳಲ್ಲಿ ಇಂಗ್ಲಿಷ್ ಬಳಕೆ --- 🔹 ಹೆಚ್ಚುವರಿ ಮಾಹಿತಿ ಜನಸಂಖ್ಯೆಯ ಬಹುಪಾಲು ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ ಕೃಷಿ ಮುಖ್ಯ ಉದ್ಯೋಗ “ಹಾರ್ನ್‌ಬಿಲ್ ಉತ್ಸವ” ಪ್ರಸಿದ್ಧ ಸಾಂಸ್ಕೃತಿಕ ಹಬ್ಬ ಭಾರತದಲ್ಲಿ ಇಂಗ್ಲಿಷ್ ಆಡಳಿತ ಭಾಷೆಯಾಗಿರುವ ಏಕೈಕ ರಾಜ್ಯ – ನಾಗಾಲ್ಯಾಂಡ್ 1. ಪರಿಚಯ ಭಾರತವು ಭಾಷಾ ವೈವಿಧ್ಯತೆಯಲ್ಲಿ ವಿಶ್ವದಲ್ಲೇ ಅಪರೂಪವಾದ ದೇಶ...

ನಿರ್ಮಲಾ ಮೇಡಂ ಬಜೆಟ್‌ನಲ್ಲಿ 2047ರತ್ತ ನೂರು ನೋಟ- ಇಳಿಕೆ - ಏರಿಕೆ ಯಾವುದು ?

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ಮಂಡಿಸಿದ ಬಜೆಟ್‌ನ ಒಟ್ಟು ಗಾತ್ರ 53.47 ಲಕ್ಷ ಕೋಟಿ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಬಜೆಟ್‌ನ ಗಾತ್ರ ₹50 ಲಕ್ಷ ಕೋಟಿ ಬೃಹತ್‌ ಗಡಿಯನ್ನು ದಾಟಿದಂತಾಗಿದೆ. 2024-25ರ ಬಜೆಟ್‌ನ ಗಾತ್ರ 46.52 ಲಕ್ಷ ಕೋಟಿ ರು.ನಷ್ಟಿತ್ತು.ಬಳಿಕ ವರ್ಷಾಂತ್ಯದಲ್ಲಿ ವೆಚ್ಚ ಹೆಚ್ಚಿದ ಕಾರಣ ಬಜೆಟ್‌ನ ಗಾತ್ರ 50 ಲಕ್ಷ ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪರಿಷ್ಕೃತ ಅಂದಾಜಿನಲ್ಲಿ ಕಳೆದ ವರ್ಷದ ಬಜೆಟ್‌ ಗಾತ್ರ 49.64 ಲಕ್ಷ ಕೋಟಿ ರು.ಗೆ ಸೀಮಿತವಾಗಬಹುದು ಎಂದು ಸರ್ಕಾರ ಹೇಳಿದೆ. ಬೆಂಗಳೂರಿಗೆ ಹೈದ್ರಾಬಾದ್‌, ಚೆನ್ನೈನಿಂದ ಹೈಸ್ಪೀಡ್‌ ರೈಲು ಬೆಂಗಳೂರು ಆರ್ಥಿಕ ವಲಯಕ್ಕೆ 5000 ಕೋಟಿ ರು. ಘೋಷಣೆ ಫ್ಯೂಚರ್ಸ್‌ ಅಂಡ್‌ ಆಪ್ಷನ್‌ಗೆ ಷೇರುಗಳಿಗೆ ತೆರಿಗೆ ಹೊಡೆತ ಆಯುರ್ವೇದ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಬಂಪರ್‌ ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನೆಗೆ ಶಕ್ತಿ ತುಂಬಲು ಮೂರು ಅಖಿಲ ಭಾರತ ಆಯುರ್ವೇದ ಮಹಾವಿದ್ಯಾಲಯಗಳ ಸ್ಥಾಪನೆ. ಉತ್ಕೃಷ್ಟ ಗುಣಮಟ್ಟದ ಪ್ರಮಾಣೀಕರಣಕ್ಕಾಗಿ ಆಯುರ್ವೇದ ಔಷಧ ಟೆಸ್ಟಿಂಗ್‌ ಲ್ಯಾಬ್‌ ಸೃಷ್ಟಿ. ಆಯುಷ್‌ ಫಾರ್ಮಸಿಗಳು ಮೇಲ್ದರ್ಜೆಗೆ. ಇದರ ಜತೆಗೆ ಆಯುಷ್‌ ಕೇಂದ್ರಗಳನ್ನು ಹೊಂದಿರುವ ಐದು ಪ್ರಾದೇಶಿಕ ಮೆಡಿಕಲ್‌ ಹಬ್‌ಗಳ ಸ್ಥಾಪನೆ. ಕೋವಿಡ್‌ ನಂತರ ಆಯುರ್ವೇದ ಕೂಡ ಯೋಗದ ರೀತಿ ಜಾಗತಿಕ ಮನ್ನಣೆ ಗಳಿಸಿದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀ...

ಸಿಗರೇಟ್ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೆ! ಅಬ್ಬಬ್ಬಾ.. ಒಂದು ಸಿಗರೇಟ್ ಪ್ಯಾಕೆಟ್ ರೇಟ್ ಇಷ್ಟೊಂದಾ?

ಸಿಗರೇಟ್ ಸೇದುವುದು ಕೇವಲ ಸೇದೋರಿಗೆ ಮಾತ್ರವಲ್ಲ, ಅವರ ಸುತ್ತಮುತ್ತ ಇರುವವರಿಗೂ ತುಂಬಾನೇ ಹಾನಿಕಾರಕ. ಹೀಗಾಗಿ, ಸಿಗರೇಟ್ ಬೆಲೆ ಏರಿಕೆಯನ್ನು ಹೆಚ್ಚಿನವರು ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರ ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲಿದ್ದ ಜಿಎಸ್‌ಟಿ ಪರಿಹಾರ ಸೆಸ್ ಬದಲಿಗೆ ಹೊಸ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ಜಾರಿ ಮಾಡಿದೆ. ಈ ಹೊಸ ತೆರಿಗೆ ಫೆಬ್ರವರಿ 1 ರಿಂದ ಜಾರಿಯಾಗಿದೆ. ಇದರಿಂದಾಗಿ ಒಂದು ಪ್ಯಾಕೆಟ್ ಸಿಗರೇಟ್ ಬೆಲೆ ರೂ. 22 ರಿಂದ ರೂ.25 ರಷ್ಟು ಹೆಚ್ಚಾಗಿದೆ. 10 ಸಿಗರೇಟ್‌ಗಳ ಪ್ಯಾಕೆಟ್ ಬೆಲೆ ರೂ.25 ರಷ್ಟು ಹೆಚ್ಚಾಗಿದೆ. ವಿಲ್ಸ್ ನೇವಿ ಕಟ್ ಬೆಲೆ ರೂ.95 ರಿಂದ ರೂ.120 ಕ್ಕೆ ಏರಿದೆ. ಗೋಲ್ಡ್ ಫ್ಲೇಕ್, ವಿಲ್ಸ್ ಕ್ಲಾಸಿಕ್ ಬೆಲೆ ರೂ.170 ರಿಂದ ರೂ.225 ಕ್ಕೆ ಹೆಚ್ಚಳವಾಗಿದೆ. ಒಂದು ಸಿಗರೇಟ್ ಬೆಲೆ ಗಾತ್ರಕ್ಕೆ ತಕ್ಕಂತೆ ಏರಿಕೆಯಾಗಿದೆ. 65mm ಫಿಲ್ಟರ್ ಇಲ್ಲದ ಸಿಗರೇಟ್‌ಗೆ ರೂ.2.5, ಫಿಲ್ಟರ್ ಇದ್ದರೆ ರೂ.2.10 ಏರಿಕೆ. 70-75mm ಸಿಗರೇಟ್‌ಗೆ ರೂ.5.40 ಹಾಗೂ ಪ್ರೀಮಿಯಂ ಸಿಗರೇಟ್‌ಗಳಿಗೆ ರೂ.8.50 ವರೆಗೆ ಬೆಲೆ ಹೆಚ್ಚಳವಾಗಿದೆ. ಸಿಗರೇಟ್ ಸೇದುವುದು ಸೇದೋರಿಗೆ ಮಾತ್ರವಲ್ಲ, ಸುತ್ತಮುತ್ತಲಿನವರಿಗೂ ಹಾನಿಕಾರಕ. ಹೀಗಾಗಿ ಬೆಲೆ ಏರಿಕೆಯನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ, ಈ ಬೆಲೆ ಏರಿಕೆಯಿಂದ ಕಳ್ಳಸಾಗಣೆ ಮತ್ತು ನಕಲಿ ಉತ್ಪನ್ನಗಳು ಹೆಚ್ಚಾಗಬಹುದು ಎಂದು ವಿತರಕರು ಎ...

ಹುಬ್ಬಳ್ಳಿ ವಿಮಾನ ನಿಲ್ದಾಣ — ಕರ್ನಾಟಕದ ಮೊದಲ ಹಸಿರು (Green) ವಿಮಾನ ನಿಲ್ದಾಣ

ಹುಬ್ಬಳ್ಳಿ ವಿಮಾನ ನಿಲ್ದಾಣ ಕರ್ನಾಟಕದ ಮೊದಲ ಹಸಿರು ವಿಮಾನ ನಿಲ್ದಾಣ ಆಗಿ ಪರಿಗಣಿಸಲಾಗಿದೆ. ಇದರಲ್ಲಿ ವಿಮಾನ ನಿಲ್ದಾಣದ ಒಳಗಿನ 38 ಎಕರೆ ಪ್ರದೇಶದಲ್ಲಿ 8 ಮೆಗಾವಾಟ್ ಸಾಮರ್ಥ್ಯದ ಸೌರ ಶಕ್ತಿ ಸ್ಥಾವರ (Solar Power Plant) ಸ್ಥಾಪಿಸಲಾಗಿದೆ. ಈ ಸೌರ ವಿದ್ಯುತ್ ಯೋಜನೆ ಡಿಸೆಂಬರ್ 2022 ರಲ್ಲಿ AAI ಅಡಿಯಲ್ಲಿ Sustainable Green Airport Mission (SUGAM) ಯೋಜನೆಯಡಿ ಕಾರ್ಯಾರಂಭವಾಯಿತು.  🌞 ಮುಖ್ಯ ವೈಶಿಷ್ಟ್ಯಗಳು: • 8 MW ಸೌರ ವಿದ್ಯುತ್ ಘಟಕವು ಹರಿತ ವಿದ್ಯುತ್ ಉತ್ಪಾದನೆ ಮೂಲಕ ವಿಮಾನ ನಿಲ್ದಾಣದ ಅಗತ್ಯವಿರುವ ಶಕ್ತಿಯನ್ನು ಪೂರೈಸುತ್ತದೆ ಮತ್ತು ಉಳಿತಾಯ ಮಾಡುತ್ತದೆ.  • ಇಲ್ಲಿ ಉತ್ಪಾದಿತ ಶಕ್ತಿಯನ್ನು Hubballi, Belagavi, Mysuru ಸೇರಿದಂತೆ ಇತರ AAI ವಿಮಾನ ನಿಲ್ದಾಣಗಳಿಗೆ ಮತ್ತು ಕೆಲವು AAI ಸ್ಥಾಪನೆಗಳಿಗೆ ನೀಡಲಾಗುತ್ತದೆ — ಇದು ಭಾರತದಲ್ಲಿಒಂದು ವಿಶೇಷ ಸಾಧನೆ.  • ಕಳೆದ ಎರಡು ವರ್ಷಗಳಲ್ಲಿ ಸುಮಾರು 2.4 ಕೋಟಿ ಘಟಕಗಳು ಶುದ್ಧ ಬಲ ವೈಜ್ಞಾನಿಕ ವಿದ್ಯುತ್ ಉತ್ಪಾದನೆ ಮಾಡಿದ್ದಾರೆ.  • ಇದರಿಂದ AAI ಸಂವಹನ ಕೇಂದ್ರಗಳು ಮತ್ತು ರಾಡಾರ್/ನೇವಿಗೇಶನ್ ಸ್ಥಾಪನೆಗಳು ಸೇರಿದಂತೆ ಅನೇಕ ಘಟಕಗಳು ಕಬ್ಬಿಣದ ವಿದ್ಯುತ್‌ ಬಿಲ್‌ ಉಳಿತಾಯ ಮಾಡಿವೆ.  • ಈ ಯೋಜನೆ 2.15 ಲಾಖ ಟೋನ್ ಕಾರ್ಬನ್ ಉತ್ಸವ ನಿಷ್ಕ್ರಮಣ ಕಡಿತಕ್ಕೆ ಸಹಾಯ ಮಾಡುತ್ತದೆ (ಇದನ್ನು ಸಂಪೂರ್ಣ ಜೀವನಾವಧಿಯಲ್ಲಿ ಅಂ...

udget 2026: ಮೊಬೈಲ್, ಫಾರಿನ್ ಟ್ರಿಪ್ ಫುಲ್ ಚೀಪ್! ಸಿಗರೇಟ್ ಸೇದೋರಿಗೆ ಶಾಕ್; ಯಾವುದು ಅಗ್ಗ? ಯಾವುದು ದುಬಾರಿ? ಪಟ್ಟಿ ಇಲ್ಲಿದೆ.

  ನವದೆಹಲಿ:  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಮಧ್ಯಮ ವರ್ಗದವರ ಜೇಬಿಗೆ ಹೊರೆಯಾಗದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ. ‘ಮೇಕ್ ಇನ್ ಇಂಡಿಯಾ’ ಉತ್ತೇಜಿಸಲು ಕಸ್ಟಮ್ಸ್ ಸುಂಕದಲ್ಲಿ (Customs Duty) ಭಾರಿ ಬದಲಾವಣೆ ಮಾಡಲಾಗಿದೆ. ಯಾವುದೆಲ್ಲ ಅಗ್ಗವಾಯ್ತು? (Cheaper): ಮೊಬೈಲ್ & ಚಾರ್ಜರ್:  ಮೊಬೈಲ್ ಫೋನ್ ತಯಾರಿಕೆಗೆ ಬಳಸುವ ಬಿಡಿಭಾಗಗಳು (PCBA) ಮತ್ತು ಚಾರ್ಜರ್‌ಗಳ ಮೇಲಿನ ಆಮದು ಸುಂಕ ಇಳಿಕೆಯಾಗಿದೆ. ಇದರಿಂದ ಆಪಲ್, ಸ್ಯಾಮ್‌ಸಂಗ್ ಫೋನ್‌ಗಳ ಬೆಲೆ ಕಡಿಮೆಯಾಗಲಿದೆ. ಜೀವ ರಕ್ಷಕ ಔಷಧಿ:  ಕ್ಯಾನ್ಸರ್ ಮತ್ತು ಡಯಾಬಿಟಿಸ್ ರೋಗಿಗಳಿಗೆ ಬೇಕಾದ 17 ಬಗೆಯ ಔಷಧಿಗಳ ಮೇಲಿನ ಸುಂಕವನ್ನು ತೆಗೆದುಹಾಕಲಾಗಿದೆ. ಇದು ರೋಗಿಗಳಿಗೆ ದೊಡ್ಡ ರಿಲೀಫ್. ವಿದೇಶಿ ಪ್ರವಾಸ (Foreign Trip):  ವಿದೇಶಿ ಪ್ರವಾಸದ ಪ್ಯಾಕೇಜ್‌ಗಳ ಮೇಲಿನ TCS ದರವನ್ನು 5% ರಿಂದ 2% ಕ್ಕೆ ಇಳಿಸಲಾಗಿದೆ. ಈಗ ಫಾರಿನ್ ಟ್ರಿಪ್ ಬಜೆಟ್ ಫ್ರೆಂಡ್ಲಿ ಆಗಲಿದೆ. ಇವಿ & ಸೋಲಾರ್:  ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಬೇಕಾದ ಲಿಥಿಯಂ ಮತ್ತು ಸೋಲಾರ್ ಪ್ಯಾನಲ್ ಬಿಡಿಭಾಗಗಳ ಮೇಲಿನ ತೆರಿಗೆ ವಿನಾಯಿತಿ ಮುಂದುವರೆಯಲಿದೆ. ಇತರೆ:  ಚರ್ಮದ ವಸ್ತುಗಳು, ಪಾದರಕ್ಷೆಗಳು ಮತ್ತು ಸೀಗಡಿ (Shrimp) ಆಹಾರ ಅಗ್ಗವಾಗಿದೆ. ಯಾವುದೆಲ್ಲ ದುಬಾರಿಯಾಯ್ತು? (Costlier): ಸಿಗರೇಟ್ (Cigarette):  ತಂಬಾಕು ಉತ್ಪನ್...

Budget 2026: ಸಿಗರೇಟ್, ಗುಟ್ಕಾ ಮೇಲಿನ ಟ್ಯಾಕ್ಸ್ 60%ಕ್ಕೆ ಏರಿಕೆ? ಆದ್ರೆ ರೇಟ್ ಮಾತ್ರ ಹೆಚ್ಚಾಗಲ್ಲ! ನಿರ್ಮಲಾ ಮೇಡಂ ಮ್ಯಾಜಿಕ್ ಇದು.

  ನವದೆಹಲಿ:  ಬಜೆಟ್ ಭಾಷಣದ ನಂತರ “ಎಣ್ಣೆ ರೇಟ್ ಜಾಸ್ತಿ ಆಯ್ತಂತೆ, ಸಿಗರೇಟ್ ಟ್ಯಾಕ್ಸ್ ಹೆಚ್ಚಾಯ್ತಂತೆ” ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಗಾಬರಿ ಬೀಳುವ ಅಗತ್ಯವಿಲ್ಲ. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಘೋಷಣೆಯ ಸಂಪೂರ್ಣ ವಿವರ ಇಲ್ಲಿದೆ. 1. ಮದ್ಯ ಮತ್ತು ಗುಜರಿ ಡೀಲರ್‌ಗಳಿಗೆ ರಿಲೀಫ್ (2% TCS): ಇಷ್ಟು ದಿನ ಮದ್ಯ (Alcohol), ಗುಜರಿ (Scrap) ಮತ್ತು ಖನಿಜಗಳ ಮಾರಾಟದ ಮೇಲೆ ವಿಧಿಸುತ್ತಿದ್ದ ‘ಮೂಲದಲ್ಲಿ ತೆರಿಗೆ ಸಂಗ್ರಹ’ (TCS) ದರಗಳಲ್ಲಿ ಗೊಂದಲವಿತ್ತು. ಕೆಲವೊಮ್ಮೆ ಇದು ಹೆಚ್ಚಿರುತ್ತಿತ್ತು. ಆದರೆ, ಬಜೆಟ್ 2026ರಲ್ಲಿ ಇದನ್ನು ಸರಳೀಕರಿಸಲಾಗಿದೆ. ಇನ್ಮುಂದೆ ಈ ಎಲ್ಲಾ ವ್ಯಾಪಾರಗಳ ಮೇಲೆ  ‘ಫ್ಲಾಟ್ 2% (ಶೇ. 2)’  ಟ್ಯಾಕ್ಸ್ ಇರಲಿದೆ. ಲಾಭವೇನು?  ಇದರಿಂದ ವ್ಯಾಪಾರಿಗಳಿಗೆ ಲೆಕ್ಕಾಚಾರ ಸುಲಭವಾಗಲಿದ್ದು, ತೆರಿಗೆ ಹೊರೆ ಕಡಿಮೆಯಾಗಲಿದೆ. ಇದು ‘ಬಿಸಿನೆಸ್ ಫ್ರೆಂಡ್ಲಿ’ ನಿರ್ಧಾರವಾಗಿದೆ. 2. ತಂಬಾಕು ಟ್ಯಾಕ್ಸ್ ಏರಿಕೆ: ಅಸಲಿ ಟ್ವಿಸ್ಟ್ ಇಲ್ಲಿದೆ! ಜಗಿಯುವ ತಂಬಾಕು, ಜರ್ದಾ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ‘ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕ’ವನ್ನ (NCCD)  ಶೇ. 25 ರಿಂದ ಶೇ. 60 ಕ್ಕೆ  ಏರಿಸಲಾಗಿದೆ. ಈ ಸುದ್ದಿ ಕೇಳಿ ಧೂಮಪಾನಿಗಳು ಬೆಚ್ಚಿ ಬಿದ್ದಿದ್ದಾರೆ. ಆದರೆ ಸತ್ಯವೇನು?  ಸರ್ಕಾರ ಒಂದೆಡೆ NCCD ಸುಂಕವನ್ನು ಏರಿಸಿದ್ದರೂ, ಇನ್ನೊಂದೆಡೆ ಅಬಕಾರಿ ಸ...

ಪೆಂಗ್ವಿನ್‌ಗಳ ನಾಡು – ಅಂಟಾರ್ಟಿಕಾ (Antarctica) : ಸಂಪೂರ್ಣ ಮಾಹಿತಿ

 ಪೆಂಗ್ವಿನ್‌ಗಳ ನಾಡು ಎಂದು ಸಾಮಾನ್ಯವಾಗಿ ಕರೆಯಲಾಗುವುದು ಅಂಟಾರ್ಟಿಕಾ ಖಂಡವನ್ನು . ಇದು ಭೂಮಿಯ ದಕ್ಷಿಣ ಧ್ರುವ ಪ್ರದೇಶದಲ್ಲಿ ಇರುವ ಅತ್ಯಂತ ತಣ್ಣನೆಯ ಖಂಡವಾಗಿದೆ. ಅಂಟಾರ್ಟಿಕಾ ಪ್ರದೇಶವು ಹಿಮದಿಂದ ಆವೃತವಾಗಿದ್ದು, ವರ್ಷಪೂರ್ತಿ ಕಡಿಮೆ ತಾಪಮಾನ ಮತ್ತು ಕಠಿಣ ಹವಾಮಾನವನ್ನು ಹೊಂದಿದೆ. ಈ ಕಠಿಣ ಪರಿಸರದಲ್ಲಿಯೇ ಪೆಂಗ್ವಿನ್‌ಗಳು ಸುಖವಾಗಿ ಬದುಕುವಂತೆ ತಮ್ಮ ದೇಹವನ್ನು ಹೊಂದಿಸಿಕೊಂಡಿವೆ. ಪೆಂಗ್ವಿನ್‌ಗಳ ವಾಸಸ್ಥಳ ಪೆಂಗ್ವಿನ್‌ಗಳು ಮುಖ್ಯವಾಗಿ ಅಂಟಾರ್ಟಿಕಾ ಹಾಗೂ ಅದರ ಸುತ್ತಲಿನ ದ್ವೀಪಗಳಲ್ಲಿ ಕಂಡುಬರುತ್ತವೆ. ಕೆಲವು ಪೆಂಗ್ವಿನ್ ಜಾತಿಗಳು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಕರಾವಳಿ ಪ್ರದೇಶಗಳಲ್ಲೂ ವಾಸಿಸುತ್ತವೆ. ಆದರೆ ಪೆಂಗ್ವಿನ್‌ಗಳ ಹೆಚ್ಚಿನ ಸಂಖ್ಯೆಯ ವಾಸಸ್ಥಳ ಅಂಟಾರ್ಟಿಕಾದಲ್ಲೇ ಇದೆ. ಪೆಂಗ್ವಿನ್‌ಗಳ ಜಾತಿಗಳು ಪ್ರಪಂಚದಲ್ಲಿ ಸುಮಾರು 18 ರಿಂದ 20 ಪೆಂಗ್ವಿನ್ ಜಾತಿಗಳು ಇವೆ. ಪ್ರಮುಖ ಜಾತಿಗಳು: ಎಂಪರರ್ ಪೆಂಗ್ವಿನ್ (Emperor Penguin) ಕಿಂಗ್ ಪೆಂಗ್ವಿನ್ (King Penguin) ಅಡೆಲಿ ಪೆಂಗ್ವಿನ್ (Adélie Penguin) ಚಿನ್‌ಸ್ಟ್ರಾಪ್ ಪೆಂಗ್ವಿನ್ (Chinstrap Penguin) ಜೆಂಟೂ ಪೆಂಗ್ವಿನ್ (Gentoo Penguin) ಎಂಪರರ್ ಪೆಂಗ್ವಿನ್ ಜಾತಿ ಅತಿದೊಡ್ಡದು ಮತ್ತು ಅಂಟಾರ್ಟಿಕಾದ ಅತ್ಯಂತ ತಣ್ಣನೆಯ ಪ್ರದೇಶದಲ್ಲೂ ಬದುಕುವ ಸಾಮರ್ಥ್ಯ ಹೊಂದಿದೆ. ದೇಹದ ಲಕ್ಷಣಗಳು ಪೆಂಗ್ವಿನ್‌ಗ...