ವಿಷಯಕ್ಕೆ ಹೋಗಿ

ನಮ್ಮೂರಿಗೆ ರಸ್ತೆಯಿಲ್ಲ ಎಂದ World Cup ತಂದುಕೊಟ್ಟ ಗಡಿನಾಡ ಕನ್ನಡತಿ; 5 ನಿಮಿಷಕ್ಕೆ ಸ್ಯಾಂಕ್ಷನ್ ಮಾಡಿದ DCM!

Deepika Tc News: ಭಾರತಕ್ಕೆ ವಿಶ್ವಕಪ್‌ ತಂದುಕೊಟ್ಟ ಅಂಧರ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ದೀಪಿಕಾ ಟಿಸಿ ಅವರು ಡಿಸಿಎಂ ಬಳಿ ರಸ್ತೆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹೀಗೆ ಹೇಳಿ ಐದು ನಿಮಿಷಕ್ಕೆ ರಸ್ತೆ ಜಾರಿಯಾಗಿದೆ.





ತುಮಕೂರಿನ ಶಿರಾ ತಾಲೂಕಿನ ಹುಡುಗಿ ದೀಪಿಕಾ ಟಿಎಸ್.‌ ಈಗ ದೀಪಿಕಾ ಊರು ಹೇಮಾವತಿ ಆಂಧ್ರಪ್ರದೇಶಕ್ಕೆ ಸೇರುತ್ತದೆ.

ಐದು ತಿಂಗಳ ಮಗು ಆಗಿದ್ದಾಗ ಉಗುರಿನಲ್ಲಿ ಪರಚಿಕೊಂಡು ಕಣ್ಣು ಹೋಯಿತು. ನರ ವೀಕ್‌ ಇದ್ದರಿಂದ ಆಪರೇಶನ್‌ ಮಾಡಿಸಲು ಆಗೋದಿಲ್ಲ ಎಂದು ಹೇಳಿದ್ದರಂತೆ.

ದೀಪಿಕಾ ಅವರು ಊಟಕ್ಕೆ ಒದ್ದಾಡಿದ್ದಾರೆ. ಇಡೀ ಕುಟುಂಬ ಬಡತನದಲ್ಲಿ ಇಷ್ಟು ವರ್ಷ ಕಳೆದಿದೆ. ಕ್ರಿಕೆಟ್‌ನಿಂದ ಹಣ ಸಿಕ್ಕಿದರೆ, ಇಡೀ ತಿಂಗಳು ಮನೆಯವರಿಗೆ ಊಟ ಮಾಡೋಕೆ ರೇಶನ್‌ ಸಿಗುತ್ತದೆ ಎಂಬ ಆಸೆಯಿತ್ತಂತೆ. ಅದರಂತೆ ಅವರು ಕ್ರಿಕೆಟ್‌ ಆಡಿ ವರ್ಲ್‌ಕಪ್‌ ತಂದುಕೊಟ್ಟರು.

ನಾನು ಆನಂದಪುರ ಜಿಲ್ಲೆಯಾಗಿದ್ದು, ಈಗ ಸತ್ಯಸಾಯಿಯಾಗಿದೆ. ನಮ್ಮ ಊಟು ಕರ್ನಾಟಕ, ಆಂಧ್ರಪ್ರದೇಶದ ಬಾರ್ಡರ್‌ನಲ್ಲಿ ಬರುವುದು. ನಾನು ಕರ್ನಾಕಟದಲ್ಲಿ ಓದಿದ್ದೇನೆ. ನಮ್ಮ ಊರಿನಲ್ಲಿ ರಸ್ತೆಯೂ ಇಲ್ಲ. ನಮ್ಮ ಊರಿನಲ್ಲಿರುವವರಿಗೆ ಊಟ-ತಿಂಡಿ ಕೂಡ ಸಿಗೋದಿಲ್ಲ ಎಂದು ಪವನ್‌ ಕಲ್ಯಾಣ್‌ ಮುಂದೆ ಹೇಳಿದ್ದಾರೆ.

ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಅವರ ಬಳಿ ದೀಪಿಕಾ ಈ ವಿಚಾರವಾಗಿ ಮಾತನಾಡಿದ್ದರು. ದೀಪಿಕಾ ಅವರು ಸಮಸ್ಯೆ ಹೇಳಿಕೊಂಡು ಐದು ನಿಮಿಷಕ್ಕೆ ಓಕೆ ಎಂದಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಮಂಜೂರಿ ಆಗಿದೆಯಂತೆ.

ಮ್ಯಾಚ್‌ನಲ್ಲಿ ಹಣ ಸಿಗುತ್ತದೆ ಎಂದು ಎಷ್ಟೋ ಹೆಣ್ಣು ಮಕ್ಕಳು ಕ್ರಿಕೆಟ್‌ ರಂಗಕ್ಕೆ ಬರುವುದುಂಟು. ಇದರಿಂದ ಮನೆಗೆ ಸಹಾಯ ಮಾಡಬಹುದು ಎಂಬ ಆಸೆ ಇದೆ. ಗಬ್ಬರ್‌ ಸಿಂಗ್‌ ಸಿನಿಮಾವನ್ನು ನಾನು ಎಷ್ಟು ಬಾರಿ ನೋಡಿದ್ದೀನೋ ಗೊತ್ತಿಲ್ಲ, ನನಗೆ ಅಷ್ಟು ಇಷ್ಟ ಆಗಿತ್ತು. ನೀವು ನಮ್ಮ ಸಮಸ್ಯೆಯನ್ನು ಬಗೆಹರಿಸ್ತೀರಿ ಎಂದು ನಂಬಿದ್ದೇನೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Royal Challengers Bengaluru

  Royal Challengers Bengaluru ,

Budget 2026: ಸಿಗರೇಟ್, ಗುಟ್ಕಾ ಮೇಲಿನ ಟ್ಯಾಕ್ಸ್ 60%ಕ್ಕೆ ಏರಿಕೆ? ಆದ್ರೆ ರೇಟ್ ಮಾತ್ರ ಹೆಚ್ಚಾಗಲ್ಲ! ನಿರ್ಮಲಾ ಮೇಡಂ ಮ್ಯಾಜಿಕ್ ಇದು.

  ನವದೆಹಲಿ:  ಬಜೆಟ್ ಭಾಷಣದ ನಂತರ “ಎಣ್ಣೆ ರೇಟ್ ಜಾಸ್ತಿ ಆಯ್ತಂತೆ, ಸಿಗರೇಟ್ ಟ್ಯಾಕ್ಸ್ ಹೆಚ್ಚಾಯ್ತಂತೆ” ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಗಾಬರಿ ಬೀಳುವ ಅಗತ್ಯವಿಲ್ಲ. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಘೋಷಣೆಯ ಸಂಪೂರ್ಣ ವಿವರ ಇಲ್ಲಿದೆ. 1. ಮದ್ಯ ಮತ್ತು ಗುಜರಿ ಡೀಲರ್‌ಗಳಿಗೆ ರಿಲೀಫ್ (2% TCS): ಇಷ್ಟು ದಿನ ಮದ್ಯ (Alcohol), ಗುಜರಿ (Scrap) ಮತ್ತು ಖನಿಜಗಳ ಮಾರಾಟದ ಮೇಲೆ ವಿಧಿಸುತ್ತಿದ್ದ ‘ಮೂಲದಲ್ಲಿ ತೆರಿಗೆ ಸಂಗ್ರಹ’ (TCS) ದರಗಳಲ್ಲಿ ಗೊಂದಲವಿತ್ತು. ಕೆಲವೊಮ್ಮೆ ಇದು ಹೆಚ್ಚಿರುತ್ತಿತ್ತು. ಆದರೆ, ಬಜೆಟ್ 2026ರಲ್ಲಿ ಇದನ್ನು ಸರಳೀಕರಿಸಲಾಗಿದೆ. ಇನ್ಮುಂದೆ ಈ ಎಲ್ಲಾ ವ್ಯಾಪಾರಗಳ ಮೇಲೆ  ‘ಫ್ಲಾಟ್ 2% (ಶೇ. 2)’  ಟ್ಯಾಕ್ಸ್ ಇರಲಿದೆ. ಲಾಭವೇನು?  ಇದರಿಂದ ವ್ಯಾಪಾರಿಗಳಿಗೆ ಲೆಕ್ಕಾಚಾರ ಸುಲಭವಾಗಲಿದ್ದು, ತೆರಿಗೆ ಹೊರೆ ಕಡಿಮೆಯಾಗಲಿದೆ. ಇದು ‘ಬಿಸಿನೆಸ್ ಫ್ರೆಂಡ್ಲಿ’ ನಿರ್ಧಾರವಾಗಿದೆ. 2. ತಂಬಾಕು ಟ್ಯಾಕ್ಸ್ ಏರಿಕೆ: ಅಸಲಿ ಟ್ವಿಸ್ಟ್ ಇಲ್ಲಿದೆ! ಜಗಿಯುವ ತಂಬಾಕು, ಜರ್ದಾ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ‘ರಾಷ್ಟ್ರೀಯ ವಿಪತ್ತು ಅನಿಶ್ಚಿತ ಸುಂಕ’ವನ್ನ (NCCD)  ಶೇ. 25 ರಿಂದ ಶೇ. 60 ಕ್ಕೆ  ಏರಿಸಲಾಗಿದೆ. ಈ ಸುದ್ದಿ ಕೇಳಿ ಧೂಮಪಾನಿಗಳು ಬೆಚ್ಚಿ ಬಿದ್ದಿದ್ದಾರೆ. ಆದರೆ ಸತ್ಯವೇನು?  ಸರ್ಕಾರ ಒಂದೆಡೆ NCCD ಸುಂಕವನ್ನು ಏರಿಸಿದ್ದರೂ, ಇನ್ನೊಂದೆಡೆ ಅಬಕಾರಿ ಸ...

ಕರ್ನಾಟಕ ಬಂದ್‌: ಸರ್ಕಾರಿ ಕಚೇರಿ, ಶಾಲೆ ಕಾಲೇಜು ರಜೆ ಇದೆಯೇ? ಏನಿರುತ್ತೆ? ಏನಿರಲ್ಲ?

  ಕನ್ನಡ ಪರ ಸಂಘಟನೆಗಳು ಮಾರ್ಚ್‌ 22 ರಂದು ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ. ಇವರಿಗೆ ಹಲವು ಸಂಘಟನೆಗಳು ನೇರ, ಬಾಹ್ಯ, ನೈತಿಕ ಬೆಂಬಲ ನೀಡಿವೆ. ಇನ್ನು ಕೆಲವರು ಬಂದ್‌ ಬೇಡ ಎಂದಿದ್ದಾರೆ. ಇತ್ತ ಬಂದ್‌ನ ದಿನ ಸೇವೆಗಳಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಜನರಲ್ಲಿದೆ. ಶನಿವಾರ ಏನಿರುತ್ತೆ? ಏನಿರಲ್ಲ? ಎಂಬ ವಿವರ ಇಲ್ಲಿದೆ.   ಬೆಂಗಳೂರು : ಕನ್ನಡ ಪರ ಸಂಘಟನೆಗಳು ಶನಿವಾರ ( ಮಾರ್ಚ್ ‌ 22) ಕರ್ನಾಟಕ ಬಂದ್ ‌ ಗೆ ಕರೆಕೊಟ್ಟಿವೆ . ಹೀಗಾಗಿ , ಸರ್ಕಾರಿ ಕಚೇರಿಗಳು , ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆಯೋ ? ಇಲ್ಲವೋ ? ಸಾರಿಗೆ ಸೌಲಭ್ಯ ವ್ಯತ್ಯಯವಾಗುತ್ತದೆಯೇ ? ಎಂಬ ಪ್ರಶ್ನೆ ಹಲವರಲ್ಲಿದೆ . ​ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮರಾಠಿಗರು ಕನ್ನಡಿಗರ ವಿರುದ್ಧ ನಡೆಸಿದ ಹಲ್ಲೆ , ದಬ್ಬಾಳಿಕೆ ಖಂಡಿಸಿ ವಾಟಾಳ್ ‌ ನಾಗರಾಜ್ ‌ ನೇತೃತ್ವದಲ್ಲಿ   ಹಲವು ಸಂಘಟನೆಗಳು ಬಂದ್ ‌ ಗೆ   ಮುಂದಾಗಿವೆ . ಸದ್ಯ ಇದಕ್ಕೆ ವಿವಿಧ ಸಂಘಟನೆಗಳು ನೈತಿಕ , ಬಾಹ್ಯ ಬೆಂಬಲ ನೀಡಿವೆ . ಇದರಿಂದ ಜನಜೀವನದಲ್ಲಿ ಒಂದಿಷ್ಟು ವ್ಯತ್ಯಯವಾಗುವ ಸಾಧ್ಯತೆಗಳಿವೆ . ಆದರೆ , ಸರ್ಕಾರ ಬೆಂಬಲ ನೀಡದ ಹಿನ್ನೆಲೆ ಶಾಲಾ - ಕಾಲೇಜುಗಳು , ಸರ್ಕಾರಿ ಕಚೇರಿಗಳು , ಸಾರಿಗೆ ಬಸ್ ‌ ಗಳು ಎಂದಿನಂತೆ ಸಂಚಾರ ನಡೆಸಲಿವೆ . ಬೆಂಗಳೂರು , ಜಿಲ್ಲಾ ಕೇಂದ್ರಗಳಲ್ಲಿ ಪ...