ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವ ವಾದವನನ್ನು ಬೆಂಬಲಿಸಿ ಪಾಕಿಸ್ತಾನ ಪರವಾಗಿದ್ದ ಹುರಿಯತ್ ಕಾನ್ಫರೆನ್ಸ್ ನ ಎರಡು ಸಂಘಟನೆಗಳು ತಮ್ಮ ಪ್ರತ್ಯೇಕತಾವಾದದ ( ಸೆಪರೇಟಿಸಂ ) ನೀತಿಯನ್ನು ತೊರೆದು , ಕೇಂದ್ರ ಸರ್ಕಾರದೊಂದಿಗೆ ಒಗ್ಗೂಡುವ ನಿರ್ಧಾರವನ್ನು ತೆಗೆದುಕೊಂಡಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದಾರೆ . ನವದೆಹಲಿ : ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಮಹತ್ವದ ಘೋಷಣೆ ಮಾಡಿದ್ದಾರೆ . ಆದರಂತೆ ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವ ವಾದವನನ್ನು ಬೆಂಬಲಿಸಿ ಪಾಕಿಸ್ತಾನ ಪರವಾಗಿದ್ದ ಹುರಿಯತ್ ಕಾನ್ಫರೆನ್ಸ್ ನ (Hurriyat Conference) ಎರಡು ಸಂಘಟನೆಗಳು ತಮ್ಮ ಪ್ರತ್ಯೇಕತಾವಾದದ ( ಸೆಪರೇಟಿಸಂ - Separatism) ನೀತಿಯನ್ನು ತೊರೆದು , ಕೇಂದ್ರ ಸರ್ಕಾರದೊಂದಿಗೆ ಒಗ್ಗೂಡುವ ನಿರ್ಧಾರವನ್ನು ತೆಗೆದುಕೊಂಡಿವೆ ಎಂದು ಅವರು ಘೋಷಿಸಿದರು . ಜೊತೆಗೆ ಈ ಬೆಳವಣಿಗೆಯನ್ನು ಸ್ವಾಗತಿಸಿರುವ ಅಮಿತ್ ಶಾ ಅವರು , ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಸರ್ಕಾರದ ಏಕೀಕರಣ ನೀತಿಗಳ ಯಶಸ್ಸಿನ ಸಂಕೇತವಾಗಿದೆ ಎಂದು ಪ್ರತಿಪಾದಿಸಿದ್ದರು . ಎರಡು ಸಂಘ...